• ಅಮೃತ್ BMC ಒಂದು ವಿಶೇಷವಾಗಿ ರೂಪಿಸಲಾದ ದ್ರವ ಜೈವಿಕ ಗೊಬ್ಬರವಾಗಿದ್ದು, ಇದು ಸಸ್ಯ ಬೆಳವಣಿಗೆಯನ್ನು ಉತ್ತೇಜಿಸುವ ಸೂಕ್ಷ್ಮಜೀವಿಗಳಿಗೆ ಅಗತ್ಯವಾದ ಪೋಷಕಾಂಶಗಳು ಮತ್ತು ಪ್ರೋಟೀನ್ಗಳನ್ನು ಒಳಗೊಂಡಿದೆ, ಇದು ಸಾರಜನಕ ಸ್ಥಿರೀಕರಣ, ರಂಜಕ ಕರಗಿಸುವಿಕೆ, ಪೊಟ್ಯಾಷ್ ಮತ್ತು ಸತು ಸಜ್ಜುಗೊಳಿಸುವಿಕೆಗೆ ಸಹಾಯ ಮಾಡುತ್ತದೆ.
ಪ್ರಯೋಜನಗಳು
• ಅಮೃತ್ BMC ಯಲ್ಲಿರುವ ಸೂಕ್ಷ್ಮಜೀವಿಗಳು ಲಭ್ಯವಿಲ್ಲದ ರೂಪದ NPK ಅನ್ನು ಲಭ್ಯವಿರುವ ರೂಪಕ್ಕೆ ಪರಿವರ್ತಿಸುತ್ತವೆ.
• ಅಮೃತ್ BMC ಬೇಗನೆ ಚಿಗುರೊಡೆಯುವಿಕೆಯನ್ನು ಉತ್ತೇಜಿಸುತ್ತದೆ ಮತ್ತು ಹಣ್ಣು ಪಕ್ವವಾಗಲು ಬೇಕಾದ ಸಮಯವನ್ನು ಕಡಿಮೆ ಮಾಡುತ್ತದೆ.
• ಅಮೃತ್ BMC ಬೇರಿನ ಪ್ರದೇಶದಲ್ಲಿ ಸೂಕ್ಷ್ಮಜೀವಿಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ ಮತ್ತು ಮಣ್ಣಿನ ಫಲವತ್ತತೆಯನ್ನು ಪುನಃಸ್ಥಾಪಿಸುತ್ತದೆ.
• ಅಮೃತ್ BMC ಮಣ್ಣಿನ ನಿರ್ವಹಣೆ ಮತ್ತು ಪೋಷಕಾಂಶ ಸಜ್ಜುಗೊಳಿಸುವಿಕೆ, ರೋಗ ತಡೆಗಟ್ಟುವಿಕೆ ಮತ್ತು ಒತ್ತಡ ಸಹಿಷ್ಣುತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
• ಮೇಲೆ ತಿಳಿಸಿದ ಎಲ್ಲಾ ಪ್ರಯೋಜನಕಾರಿ ಅಂಶಗಳಿಂದಾಗಿ ಬೆಳೆ ಇಳುವರಿ 10-20% ಹೆಚ್ಚಾಗುತ್ತದೆ.
ಬಳಸುವ ವಿಧಾನ
• ಮಣ್ಣಿನ ಉಪಚಾರ:- 1 ಎಕರೆ ಪ್ರದೇಶಕ್ಕೆ 5 ಲೀಟರ್ ಅಮೃತ್ BMC ಅನ್ನು ಹನಿ ನೀರಾವರಿ ಮೂಲಕ ಹಾಕಿ, ವರ್ಷಕ್ಕೆ ಎರಡು ಬಾರಿ ಪುನರಾವರ್ತಿತ ಬಳಕೆ ಮಾಡಿ.
• 5 ಲೀಟರ್ ಅಮೃತ್ BMC ಅನ್ನು 300-400 ಕೆ.ಜಿ. ಅಮೃತ್ ಗೋಲ್ಡ್ / ಕೊಟ್ಟಿಗೆ ಗೊಬ್ಬರದಲ್ಲಿ ಬೆರೆಸಿ ಪ್ರತಿ ಗಿಡಕ್ಕೆ 1-2 ಕೆ.ಜಿ. ಹಾಕಿ.
• ಕಂದು ಉಪಚಾರ:- 500 ಮಿ.ಲೀ. ಅಮೃತ್ BMC ಅನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಕಂದುಗಳನ್ನು 20 ನಿಮಿಷಗಳವರೆಗೆ ಅದ್ದಿ ಉಪಚರಿಸಿ.
• 5 ಲೀಟರ್ ಅಮೃತ್ BMC ಅನ್ನು 200 ಲೀಟರ್ ಜೀವಾಮೃತದೊಂದಿಗೆ ಬೆರೆಸಿ ನಾಲ್ಕು ದಿನಗಳ ಕಾಲ ನಿಯಮಿತವಾಗಿ ಕಲಕುತ್ತಾ ಇಡಿ, ನಂತರ ತಯಾರಿಸಿದ ಮಿಶ್ರಣವನ್ನು ಬಾಳೆ ತೋಟಕ್ಕೆ ಹಾಕಿ.